Posts

Showing posts from May, 2023

Poreyenna poreyenna pundarikaksha

ಪೊರೆಯನ್ನ ಪೊರೆಯನ್ನ ಪುಂಡರಿಕಾಕ್ಷ ಪಂಕಜ ನಾಭ ಶ್ರೀ ಪಂಡರಿ ರಾಯ । ಭವ ಗಡು ಗಾಡಲಿ ತಿರುಗುತ್ತಿರುಗುತಿರೆ. ಕವಿದಿರೆ ಕತ್ತಲು ಒಳಪೊರ ಗೆಲ್ಲಲು । ಕವಿನಿನ್ನ ಮಹಿಮೆಂಬ ಇನನನ್ನೆ  ಕಳುಹಿಸೋ. ಭವಬೊಮ್ಮ ಪ್ರವರ್ತಕ ಪ್ರಭುವೆನ್ನ ಕೇಶವ ।।೧।। ಸರ್ವಗುಣ ಪೂರ್ಣನೆ ಸರ್ವದೋಷ ದೂರನೆ. ಸರ್ವ ಗುಣಗಳಿಂದಲಿ ಚತುರ್ಮುಖೋಪಾಸ್ಯನೆ । ಸರ್ವರಿಂದ ಗಮ್ಯನೆ ಬ್ರಹ್ಮಸೂತ್ರಗಳ್ನಿತ್ಯ. ಸರ್ವಾಧ್ಯಾಯಪ್ರತಿಪಾದ್ಯ ದೊರೆಯನ್ನ ನಾರಾಯಣ।। ೨ ।। ಶುದ್ದಿಮಾಡೋ ಎನ್ನಮನ ಬಿನ್ನೈಪೆನು ನಾ ನಿನ್ನ . ಬದ್ಧನಾಗಿ ಒದ್ದಾಡುವೆ ತ್ರಿಗುಣಂಗಳ್ರಜ್ಜುವಿಂದ । ಸಿದ್ಧಿಗಳ ನೀನಯ್ಯ ಸಾಧನೆಗಳ್ತ್ವರದಲಿ. ಬುದ್ಧಿಯಿತ್ತು ಸಲಹಯ್ಯ ರಮ್ಮೆ ಪತಿ ಮಾಧವನೆ ।।೩।। ಕಾದಿರುವೆ ಸದಾ ನಿನ್ನ ಕರುಣೆಯು ಬಾಹುದೆಂದು. ಬಂದಿರುವೆ ನಿನ್ನಲ್ನಾನು ಮೊರೆಯನ್ನು ಪೋಕ್ಕುತಲಿ। ಕುಂದನೇಣಿಸದೆಯನ್ನು ಸಲಹೆನ್ನ ದಯತೋರಿ. ವೇದಗಳಿಂವೇದ್ಯನಯ್ಯ ತಂದೆಯೆ ಶ್ರೀಗೊವಿಂದನೆ ।। ೪ ।। ಇಷ್ಟು ಕೋಪವೇಂತಯ್ಯ ನಿತ್ಯದಯಿ ಶ್ರೀಪತಿ . ಕಷ್ಟದವೆಲ್ಲ ತೆರೆಯಯ್ಯ  ಕರುಣಾಳು ಭವದಲ್ಲಿ । ಶಿಷ್ಟ ಪ್ರೀತ ಭಕ್ತಪ್ರೇಮಿ ಪೇಳಲೆಂತೋ ನಿನ್ನ ಗುಣ . ಇಷ್ಟಂತಿಲ್ಲಾದಷ್ಟಂತಿಲ್ಲ ವ್ಯಾಪ್ತ ದೊರೆ ವಿಷ್ಣೋ ಎನ್ನ ।।೫।। ಗುಣವೊಂದನಾದರು ಅರಿಯುವಬಲವಿಲ್ಲ. ಮಣಮಣ ದೋಷದಿಂದ ಗ್ರಸ್ತನಾಗಿ ಕೆಟ್ಟಿರುವೆ। ಅಣಿಮಾದಿಮಹಿಮನೆ ತವಕದಿನ್ದುದ್ಧರಿಸೋ.  ಅಣುರೇಣುವಿತತನೆ ತಂದೆಮಧುಸೂದನ ।। ೬ ।। ಅಣ್ಣ ಶಕ್ರದೇವ ಬೇಡೆ ತಮ್ಮನಾಗಿ...

Namo namo Vadiraja

 ಭಜನಾ ಧಾಟಿ. ನಮೊನಮೊ ನಮೊನೆಮೊ ವಾದಿರಾಜ | ನಮೊನಮೊ ಶರಣರ ಸುರಭೂಜ || ಹಯಮುಖ ನೋಲಿಸಿದೆ ವಾದಿರಾಜ | ಭಯಗಳ ಕೆಳೆವನೆ ವಾದಿರಾಜ | | ಭಾವಿಸಮೀರನೆ ವಾದಿರಾಜ | ಭೂವರಹ ಪ್ರಿಯ ವಾದಿರಾಜ | | ಭೂಸುರ ವರ್ಯನೆ ವಾದಿರಾಜ | ಸೂಸುವ ಸುಖವನು ವಾದಿರಾಜ | | ಯುಕುತಿಯ ಮಲ್ಲಿಗೆ ವಾದಿರಾಜ |  ಮುಕುತಿಗೆ ಮಾಡಿದೆ ವಾದಿರಾಜ | | ಮುನಿಕುಲರನ್ನನೆ ವಾದಿರಾಜ | ಮುನಿಗಳ ವಂದಿತ ವಾದಿರಾಜ | | ಕಾಕು ಮತಂಗಳ ವಾದಿರಾಜ | ಸಾಕು ಗೊಳಸಿದಾ ವಾದಿರಾಜ II ಯತಿಕುಲಮುಕುಟನೆ ವಾದಿರಾಜ | ವ್ರತ ತಪಸಿನ ಗುರು ವಾದಿರಾಜ II ಮಧ್ವರ ದಾಸನೆ ವಾದಿರಾಜ | ಬದ್ಧರ ಬಿಡಿಸುವ ವಾದಿರಾಜ I l  ವಿಮಲ ಜ್ಞಾನನೆ ವಾದಿರಾಜ | ಶಮಲವ ಹರಿಪನೆ ವಾದಿರಾಜ II   ರಾಜರರಾಜನೇ ವಾದಿರಾಜ I ವಾದಿರಾಜ ಗುರು ವಾದಿರಾಜ | | ಸಿರಿ ಮಧ್ವ ನಾಥನ ವಾದಿರಾಜ ಮರಳುಗೊಳಿಸಿದನೆ ವಾದಿರಾಜ ||

Deva bandanu Odeya bandanu

ದೇವ ಬಂದನು ಒಡೆಯ ಬಂದನು ಕಾವ ಗೋಗಳ ಬಂದನು | ಕಾವ ಗೋಗಳ ಕಾಮಿತಾರ್ಥವ ನೀವ ಭಕುತಗೆ ಬಂದನು || ೧ ಮುದ್ದು ಮುಂಗುರುಲಾಸ್ಯದ ಚೆಲುವ ಒದ್ದು ಬಂಡಿಯ ಲೇಲೆಲಿ | ಒದ್ದು ಬಂಡಿಯ ಲೇಲೆಲಿ ರಂಗದಿ ಗೆದ್ದು ಮಾವನ ಮೋಹನ || ೨ ನೀಲ ಬಣ್ಣದ ಮಯ್ಯವ ಬಂದನು ನೀಲ ವಸನನ ಸಹಜನು | ನೀಲ ವಸ್ತ್ರನ ತಮ್ಮನು ಅಂಬುಜ ಮಾಲನು ಆಡುತ ಬಂದನು || ೩ ಸತಿಗೆ ಪುಷ್ಪದ ಭೂರುಹವಿತ್ತವ ಪತಿತ ಪಾವನ ಬಂದನು | ಪತಿತ ಪಾವನ ದಾಸರು ಪಾಡುವ ತುತಿಗೆ ಹಿಗ್ಗುವ ಬಂದನು || ೪ ನಾಥ ರಕ್ಷಿಸು ಎನ್ನುತಲಾ ಮಹ ಗಾತ್ರನು ಸೂನವನರ್ಪಿಸಲು | ವಾತನಯ್ಯನು ಬಂದನು ಮಧ್ವ ನಾಥನು ಪಕ್ಷಿಯ ವಾಹನ || ೫

Vysarendare Vedavysa

ವ್ಯಾಸರೆಂದರೆ ವೇದವ್ಯಾಸ ದೇವರ ದೇವ | ಪ  ಘಾಸಿ ಮಾಡದೆ ಇವನ ಭಜಿಸೆಲೊ ಮನುಜ | ಅ.ಪ. ವರಜಟಾ ಮಂಡಲ ಮುನಿಗಳ ಪುಂಗವ ಪರಿಪರಿ ಶೃತಿಗಳ ಕಡೆದವನಂದದಿ | ಪುರಹರನಂಶನ ಜನಕನು ಸೂರಿಯು ಹರಿನಿಲದ ನೀಲ ಮಯ್ಯವಗುಣಿಯು || ೧ ತುಂಬುರು ನಾರದ ದಿವಿಜರ ಪ್ರೀತನು ಬೆಂಬಿಡದೆ ಕಾಮಿತ ವರಗಳ ನೀವನು| ಜಂಬುನದಾಂಬರ ಮಣಿಗಳ ಮಾಲನು ಅಂಬುಜನಯನನು ಇಂದಿರೆ ರಮಣನು || ೨ ಪರಶರ ಋಷಿಗಳ ನಂದನ ನಂದನು ಸುರರನು ಭೋದಿಪ ಮುರಹರರೂಪನು| ಗುರುವರ ಜಗಕೆಲ್ಲ ಸೂತ್ರದ ಕರುತು ಗುರುಮಧ್ವರಾಯರ ಇಷ್ಟದ ದೈವತ || ೩ ವ್ರತ ಯಜ್ಞ ತಪಸಿಗೆ ನಿಲುಕದ ಮಾಣಿಕ ಪತಿತಭಕುತರನು ಸೆಳೆಯುವ ಮುಕುತಿಗೆ| ಹತಮಾಡುವನೀತ ಅಸುರರ ಸಮರದಿ ರತಿಪತಿಜನಕನು ಮೊಸಳೆಯ ಪಾಲನು || ೪ ಭವವೆಂಬ ಕಡಲನು ತರಿಸುವ ನೌಕನು ಕವಿಗಳ ಹೃದಯಕೆ ಮನೋಹರಮೂರುತಿ | ಗವಿಯೊಳಗಿರುವನು ಒಂದೇಳಲಾಡುವನು  ಜವಪಿತ ಗುರುಮಧ್ವ ನಾಥನ ಪೆಸರವ || ೫ 

Jayatu Matsyane Jayatu Koormane

ಜಯತು ಮತ್ಸ್ಯನೆ ಜಯತು ಕೂರ್ಮನೆ ಜಯತು ಕ್ರೋಡನೆ ಜಯತು ನರಹರಿ  ಜಯತು ವಾಮನ ಜಯತು ಭಾರ್ಗವ ಜಯತು ರಾಘವನೇ | ಜಯತು ಕೃಷ್ಣನೆ ಜಯತು  ಬುದ್ಧನೆ ಜಯತು ಕಲ್ಕಿಯೆ ಜಯತು ದೇವನೆ ಜಯತು ರುಕ್ಮಿಣಿಪತಿಯೆ ನಿನ್ನಯ ಪದಕ್ಕೆ ಬಾಗುವೆನು ||  ಮತಿಗೆ ಸಲ್ಲದ ಮಹಿಮನಯ್ಯನೆ ಮತಿಗೆ ತೋರುವ ಮಹಿಮೆ ಪೇಳುವೆ ಸತಿಯ ಜತೆಯಲಿ ಪ್ರೇಮದಿಂದಲಿ ಕಲಹ ಮಾಡಿದನು | ಮತಿಯ ಪಾಲಿಸಿ ಸಲಹು ಎನ್ನನು ರತಿಯ ಕಾಂತನ ಜನಕ ವಿಷ್ಣುವೇ ಸತತ ದುರ್ಜನಹಾರಿ ಲಕುಮೀಕಾಂತ ಎನ್ನೊಡೆಯ || ಅಹಿಪಶಾಯಿಯ ಕಮ್ಮಜನಕನ ಮಹಿಷಿಯಿಪ್ಪರು ವಂದ್ಯ ಪದೆಯರು ಮಹಿತಮಹಿಮನ ಪ್ರೇಮ ವಿಷಯಯರು ದ್ವ್ಯಧಿಕಷಡ್ಜನರು | ಮಹಿಯೊಳಿಪ್ಪರೆ ಎಲ್ಲ ಕೇಳಿರಿ ತುಹಿನ ಕಿರಣನ ವಂಶ ರನ್ನಗೆ ಅಹಿಯ ಮರ್ಧನಗಧಿಕಪ್ರೀಯರು ಸತ್ಯೆಭೈಷ್ಮಿಯರು || ಏಸು ಮಹಿಮಳು ರುಗ್ಗ್ಮಿಯನುಜೆಯು ದಾಸಿ ಪಿಡಿದ ಸುರನ್ನದಂಡದ  ಬೀಸೊ ಪತ್ರವ ತಾನೇ ಪಿಡಿಯುತ ಸೇವೆ ಗಯ್ಯುತಿರೆ | ದಾಸರೊಡೆಯನು ಗೋಪಿನಂದನ ದಾಸಿಭೈಷ್ಮಿಯ ಮೊಗವ ನೋಡುತ ಹಾಸ ಮಾಡುತ ಮಾತನಾಡಿದ ಜನವಿಡಂಬಕನು || ಆವ ಭೂಪರ ಸಾಮ್ಯ ಸಲ್ಲನು ಆವ ಸೊಬಗಂಗಳಲಿ ಪೇಳೆಲೆ ಕಾವೆ ಗೋಗಳ ಕೋಲ ಪಿಡಿಯುತ ನಲಿವೆ ಅಟವಿಯಲಿ | ಕಾವರಿಲ್ಲವೆ ಭಯದಿ ಕಡಲೋ ಳಾವರಣ್ಣವ ಕಟ್ಟಿ ಇಪ್ಪೆನು ಆವ ಗುಣಗಳು ಎನ್ನಲಿಲ್ಲವೆ ಕೇಳೆ ಮಂಗಳೆಯೆ || ಅರಸಿ ಬಡವರಿಗಧಿಕ ಪ್ರೀಯನು ಹರಕು ಭಿಕ್ಷುಕ ತುತಿಪನೆನ್ನನು ಮರಳುವಾದೆಯೆ ಯಾವ ಬಗೆಯಲಿ ಪೇಳೆ ರುಕ್ಮಿಣಿಯೆ| ತರುಣಿ ಬುದ್ಧಿಯು ಇಲ್ಲ ನಿನಗೆ ಮುರನ ವೈರ...

Mahadevara Mahime

ಮಹಾದೇವರ ಮಹಿಮೆ ಏನೆಂದು ಬಣ್ಣಿಸಲಿ || ಪ || ಮಹೀಧರ ನಳಿಯನ ಸುಜನ ಶಿರೋಮಣಿ || ಅ.ಪ || ಕಮಲ ನಾಭನ ನಾಭಿ | ಕಮಲದಿ ರಾಜಿಪ |  ಕಮಲಾಸನನಂಕ ವೇರಿರಲು | ಕಮಲಾಕ್ಷನ ಸಖ ನಿ- | ಮ್ಮಂಗದಿ ನೋಡಿದ |  ಕಮಲೇಶನ ವಿಶ್ವರೂಪ ವಂದದಲಿ ||೧|| ಪತಿಯ ನಿಂದೆಯ ಕೇಳಿ |  ಸತಿಯು ದೇಹವ ಬಿಡೆ  ಉಮೆಯರಸನೆ ನಿಮ್ಮ ಸಹನೆಯು ಕೆಡಲು | ಅತಿಕೋಪದಿ ವೀರ | ಭದ್ರ ರೂಪದಿ ಬಂದು  ಹತ ಮಾಡಿದೆ ಮಾವ ದಕ್ಷನ ಶಿರವ ||೨|| ಪಾಲಿನ ಗಡಲನು |ಮಥನವ ಮಾಡಿರೆ ಹಲಾಹಲವನು ಪಾನವ ಮಾಡಿದೆ. | ನೀಲ ಕಂಧರನೆನಿಸಿ ಜಗದಲಿ ಮೆರೆದೆ | ಶೂಲಧಾರಿಯೆ ಜಗವ ಪಾಲಿಪ ಹರನೆ || ೩|| ವಿರಕುತಿಶಾಲಿಯೆ ಮುರಹರ ದಾಸನೆ| ಹರಿಯಲಿಮನಗೊಡು ಮನದಧಿಪತಿಯೆ | ಸಿರಿ ಮಧ್ವ ನಾಥನ ತೋರಿಸಿ ಭವಭಯ ಹರಣವ ಮಾಡುತ ಪೊರೆಯುವ ದೊರೆಯೇ || ೪ ||

Kusina kandira namma Guruvyasara kandira

ಕೂಸಿನ ಕಂಡೀರಾ ನಮ್ಮ ಗುರು ವ್ಯಾಸರ ಕಂಡೀರಾ | ರಾಜರ ಕಂಡೀರಾ ಯತಿವ್ಯಾಸ ರಾಜರ ಕಂಡೀರಾ || ವ್ಯಾಸ ಮಧ್ವರ ನೆಚ್ಚಿನ ಕೂಸು ವ್ಯಾಸರ ಶಾಸ್ತ್ರದಿ ಕುಶಲದ ಕೂಸು ವ್ಯಾಸರ ಶಿಷ್ಯಾವೇಶದ ಕೂಸು ಹಾಸ್ಯವ ಮಾಡಿದ ಮಾಯ್ಗಳ ಕೂಸು. ೧ ಮಂತ್ರದ ಕೋಟಿಯ ಜಪವನು ಗೈದರ ಯಂತ್ರದ ಪಾಶದಿ ಹನುಮನ ಬಿಗಿದ ತಂತ್ರದ ಯುಕುತಿಯ ಬಳಸುತ ನೀತಿಲಿ ಕಂತ್ರಿಯ ಶಿರವನು ಪದದಲಿ ಮೆಟ್ಟಿದ. ೨ ಕೃಷ್ಣನ ಕುಹಕವ ತೆರೆದರ ಮನದಿ  ಕೃಷ್ಣನ ಚರಣಾರಾಧಕ ಮುನಿಯ ಕೃಷ್ಣಾವಲ್ಲಭ ಪ್ರೀತಿಯ ಬಲದಿ  ಕೃಷ್ಣ ಪ್ರಿಯಕರ ಗ್ರಂಥವ ಬರೆದ ೩ ದಂಡರುದ್ದಂಡರ ಮೋಹವ ಕಳೆವ ಚಂಡಪ್ರಚಂಡರ ಮತಿಯನು ಕೊಡುವ  ಮಂಡನ  ಪುಂಡರಿ ಕಾಕ್ಷನ ಮಹಿಮೆಯ ಹಿಂಡನು ಡಂಗುರ ಸಾರಿದ ಮುನಿಪ ೪  ಕಾಮಗಳೆಲ್ಲವ ಗೆದ್ದಿತು ಕೂಸು ಕಾಮಿತವರಗಳ ಸೂಸುವ ಕೂಸು ಶ್ರೀ ಮಧ್ವನಾಥನ ಮುದ್ದಿನ ಕೂಸು ಸೀಮೆಯು ಇಲ್ಲದ ಗುಣಗಳ ಕೂಸು. ೫

Papiembuva Kopavu Beda

ಪಾಪಿಯುಂಬುವ ಕೋಪವು ಬೇಡ ಗೋಪಿನಂದನ ಆಹಿಪತಿ ಶಾಯಿ | ತಾಪಾಗಳಿಂದಲಿ ಬಳಲುತಲಿರುವೆ ಕೋಪವ ಮಾಡಿರೆ ಎಲ್ಲಿಗೆಪೋಗಲಿ ತಾಪವ ಕಳೆಯೋ ಬಳಲುದ ಹರಿಸಿ ಕೋಪವ ನಿಲ್ಲಿಸು ಭವಭಯಹರನೆ ಕ್ಷಣಕ್ಷಣ ಕಾಲದ ಪಾಪವ ಮಾಲ್ಪೆನು ಗುಣಗಳನೆನಿಸದೆನ್ನವಗುಣವೇಕೊ ಗುಣಗಳಬಂಧನ ಬಂಧಕೆ ಸಿಲುಕಿಹೆ ಗುಣಗಳನಾರಿಸಿ ಬಿಡಿಸುವುದೆನ್ನ  ಅಧ್ವದ ಜ್ಞಾನವು ಏನಗೊಂದಿಲ್ಲ ಅಧ್ವದಿ ಕರವನು ಪಿಡಿಯುತಲೆನ್ನ ಮಧ್ವರ ನಾಥನೆ ಕಾಯುವುದೆನ್ನ ಮಧ್ವರ ಸಮಯದಿ ಶ್ರದ್ಧೆಯ ನೀಡಿ

Ganapati Palipudu

ಗಣಪತಿ ಪಾಲಿಪುದು | ಮೃಡನ ಸುತನೆ || ಗಣಪತಿ ವಿಗ್ನಂಗಳ ಗಣಪತಿ ನಿನ್ನಯ | ಗುಣಗಳ ನಿಕರಕೆ ಗಣನೆಯು ಬಾಹುದೆ. || ರಕ್ತಗಂಧವನಿತ್ತೆ ಭಕ್ತಿಯಿಂದನುದಿನ | ರಕ್ತಾಂಬರ ಧರನೆ ಭಕ್ತಿಯ ಸಲಹಯ್ಯ || ಕುಮತಿಯ ತೆರೆದು ನಿ ಸುಮತಿಯ ಕೊಡು ದೇವ | ಮಮತೆಯ ಬಿಡಿಸಯ್ಯ ಉಮೆಯ ಕುವರ ನೀನೇ || ಸಿಹಿ ಭಕ್ಷ್ಯ ಗಳನುಣ್ಣೆ ತುಹಿನ ಕಿರಣ ನಗೆ | ಆಹಿಯನು ರಜ್ಜು ಗೈದೆ ಕುಹಕೆನ್ನ ರುಜು ಮಾಡು || ಗಾಥ ಪ್ರೀಯನೆ ಮಧ್ವ ನಾಥನ ಎಂದಿಗೂ | ಗಾಥೆಯ ಮಾಳ್ಪ ಗಣ ನಾಥ ಪೋರೆಯೋ ಎನ್ನ ||

Gajamukha Vandipenu

ಗಜಮುಖ ವಂದಿಪೆನು| ಗುರುವೇ ಗಜಮುಖ ವಂದಿಪೆನು|| ಗಜಮುಖ ವಂದಿಪೆ ಸುಕುವರ ಮೂರುತಿ | ಸುಜನರ ಪೊರೆಯುವ ಸುರವರ ಸುಚರಿತ || ಹರಸುತ ನಿರುತದಿ ಮನದವಗುಣಗಳ | ಹರಿಸುತ ಸಲಹುವ ಶುಭರದನ ಮುಖ || ಹರಿಪದ ಪತಿ ನೀನು ಗುಣಗಣ ಭರಿತನೆ | ಹರಿಪದದಲಿ ಮನ ನಾಟಿಸು ಕರುಣಿಯೆ || ಈಪರಿ ಭವಭಯ ಕಡಲೊಳು ಮುಳುಗಿಹೆ | ಕೈ ಪಿಡಿದೆನ್ನನು ಪಾರವ ಸೇರಿಸು ಹೇ|| ಮರೆ ಗೊಳಿಸೆನ್ನಯ ಕುಂದನು ಎಣಿಸದೆ | ಗುರು ಮಧ್ವ ನಾಥನ ತೋರಿಸು ದಯದಿ||