Vysarendare Vedavysa
ವ್ಯಾಸರೆಂದರೆ ವೇದವ್ಯಾಸ ದೇವರ ದೇವ | ಪ
ಘಾಸಿ ಮಾಡದೆ ಇವನ ಭಜಿಸೆಲೊ ಮನುಜ | ಅ.ಪ.
ವರಜಟಾ ಮಂಡಲ ಮುನಿಗಳ ಪುಂಗವ
ಪರಿಪರಿ ಶೃತಿಗಳ ಕಡೆದವನಂದದಿ |
ಪುರಹರನಂಶನ ಜನಕನು ಸೂರಿಯು
ಹರಿನಿಲದ ನೀಲ ಮಯ್ಯವಗುಣಿಯು || ೧
ತುಂಬುರು ನಾರದ ದಿವಿಜರ ಪ್ರೀತನು
ಬೆಂಬಿಡದೆ ಕಾಮಿತ ವರಗಳ ನೀವನು|
ಜಂಬುನದಾಂಬರ ಮಣಿಗಳ ಮಾಲನು
ಅಂಬುಜನಯನನು ಇಂದಿರೆ ರಮಣನು || ೨
ಪರಶರ ಋಷಿಗಳ ನಂದನ ನಂದನು
ಸುರರನು ಭೋದಿಪ ಮುರಹರರೂಪನು|
ಗುರುವರ ಜಗಕೆಲ್ಲ ಸೂತ್ರದ ಕರುತು
ಗುರುಮಧ್ವರಾಯರ ಇಷ್ಟದ ದೈವತ || ೩
ವ್ರತ ಯಜ್ಞ ತಪಸಿಗೆ ನಿಲುಕದ ಮಾಣಿಕ
ಪತಿತಭಕುತರನು ಸೆಳೆಯುವ ಮುಕುತಿಗೆ|
ಹತಮಾಡುವನೀತ ಅಸುರರ ಸಮರದಿ
ರತಿಪತಿಜನಕನು ಮೊಸಳೆಯ ಪಾಲನು || ೪
ಭವವೆಂಬ ಕಡಲನು ತರಿಸುವ ನೌಕನು
ಕವಿಗಳ ಹೃದಯಕೆ ಮನೋಹರಮೂರುತಿ |
ಗವಿಯೊಳಗಿರುವನು ಒಂದೇಳಲಾಡುವನು
ಜವಪಿತ ಗುರುಮಧ್ವ ನಾಥನ ಪೆಸರವ || ೫
ಘಾಸಿ ಮಾಡದೆ ಇವನ ಭಜಿಸೆಲೊ ಮನುಜ | ಅ.ಪ.
ವರಜಟಾ ಮಂಡಲ ಮುನಿಗಳ ಪುಂಗವ
ಪರಿಪರಿ ಶೃತಿಗಳ ಕಡೆದವನಂದದಿ |
ಪುರಹರನಂಶನ ಜನಕನು ಸೂರಿಯು
ಹರಿನಿಲದ ನೀಲ ಮಯ್ಯವಗುಣಿಯು || ೧
ತುಂಬುರು ನಾರದ ದಿವಿಜರ ಪ್ರೀತನು
ಬೆಂಬಿಡದೆ ಕಾಮಿತ ವರಗಳ ನೀವನು|
ಜಂಬುನದಾಂಬರ ಮಣಿಗಳ ಮಾಲನು
ಅಂಬುಜನಯನನು ಇಂದಿರೆ ರಮಣನು || ೨
ಪರಶರ ಋಷಿಗಳ ನಂದನ ನಂದನು
ಸುರರನು ಭೋದಿಪ ಮುರಹರರೂಪನು|
ಗುರುವರ ಜಗಕೆಲ್ಲ ಸೂತ್ರದ ಕರುತು
ಗುರುಮಧ್ವರಾಯರ ಇಷ್ಟದ ದೈವತ || ೩
ವ್ರತ ಯಜ್ಞ ತಪಸಿಗೆ ನಿಲುಕದ ಮಾಣಿಕ
ಪತಿತಭಕುತರನು ಸೆಳೆಯುವ ಮುಕುತಿಗೆ|
ಹತಮಾಡುವನೀತ ಅಸುರರ ಸಮರದಿ
ರತಿಪತಿಜನಕನು ಮೊಸಳೆಯ ಪಾಲನು || ೪
ಭವವೆಂಬ ಕಡಲನು ತರಿಸುವ ನೌಕನು
ಕವಿಗಳ ಹೃದಯಕೆ ಮನೋಹರಮೂರುತಿ |
ಗವಿಯೊಳಗಿರುವನು ಒಂದೇಳಲಾಡುವನು
ಜವಪಿತ ಗುರುಮಧ್ವ ನಾಥನ ಪೆಸರವ || ೫
Comments
Post a Comment